ತಾರೀಕು 02/02/2019 ರಂದು ಕಿದೂರು ಸ.ಕಿ.ಪ್ರಾ. ಶಾಲೆಯ ವಾರ್ಷಿಕೋತ್ಸವ ಹಾಗೂ ನಿವೃತ್ತಿಗೊಳ್ಳಲಿರುವ ಶಾಲಾ ಮುಖ್ಯಶಿಕ್ಷಕಿ Sowmyalatha. K ಮತ್ತು GBLPS ಆರಿಕ್ಕಾಡಿ ಜನರಲ್ ಶಾಲೆಯ ಮುಖ್ಯಶಿಕ್ಷಕ ಶ್ರೀ ಕೇಶವ.ಡಿ ಇವರಿಗೆ ಸನ್ಮಾನ ಸಮಾರಂಭ ಬಹಳ ವಿಜೃಂಭಣೆಯಿಂದ ಜರಗಿತು. ಸಭಾ ಕಾರ್ಯಕ್ರಮವನ್ನು ಶ್ರೀ ಆರಿಫ್. ಇ . ಕೆ . (Standing Committee Chair Person Kumbla Grama panchayath) ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆಯನ್ನು ಶ್ರೀ ಸುಕೇಶ್ ಭಂಡಾರಿ (Ward Member) ವಹಿಸಿದ್ದರು. ವೇದಿಕೆಯಲ್ಲಿ ಗಣ್ಯ ವ್ಯಕ್ತಿಗಳಾದ ಶ್ರೀ ವೆಂಕಪ್ಪ ಶೆಟ್ಟಿ (PTA President), ಶ್ರೀಮತಿ ಸರೋಜಿನಿ ಕೆ. ಎಸ್. (MPTA President), ಶ್ರೀ ನರಹರಿ. ಪಿ (ನಿವೃತ್ತ ಮುಖ್ಯಶಿಕ್ಷಕರು ASBS Ichlampady), ಶ್ರೀ ತುಕರಾಮ. ಯು (ನಿವೃತ್ತ Campco ಉದ್ಯೋಗಿ ) ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀ ರಾಮು. ಯು (ಹಿರಿಯ ಅಧ್ಯಾಪಕರು) ನಿರೂಪಿಸಿದರು. ಶ್ರೀಮತಿ ಜಯಶ್ರೀ ಟೀಚರ್ ಬಹುಮಾನ ವಿಜೇತರ ಹೆಸರನ್ನು ಓದಿದರು. ಶ್ರೀ ವಸಂತ ಮಾಸ್ಟರ್ ವಂದಿಸಿದರು.
ಬೆಳಗ್ಗೆ PTA President ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳಿಗೆ ಮತ್ತು ಹಳೆ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆ ನಡೆಯಿತು. ಊರ ಪರವೂರ ವಿದ್ಯಾಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಹಳೆವಿದ್ಯಾರ್ಥಿಗಳು, ವಿವಿಧ ಶಾಲಾ ಅಧ್ಯಾಪಕರು, ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳು, ಹೆತ್ತವರು ಭಾಗವಹಿಸಿದರು.
ಮದ್ಯಾಹ್ನದ ಭೋಜನದ ಬಳಿಕ ಅಂಗನವಾಡಿ ಪುಟಾಣಿಗಳು, ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ನಡೆದವು.
ಬೆಳಗ್ಗೆ PTA President ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳಿಗೆ ಮತ್ತು ಹಳೆ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆ ನಡೆಯಿತು. ಊರ ಪರವೂರ ವಿದ್ಯಾಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಹಳೆವಿದ್ಯಾರ್ಥಿಗಳು, ವಿವಿಧ ಶಾಲಾ ಅಧ್ಯಾಪಕರು, ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳು, ಹೆತ್ತವರು ಭಾಗವಹಿಸಿದರು.
ಮದ್ಯಾಹ್ನದ ಭೋಜನದ ಬಳಿಕ ಅಂಗನವಾಡಿ ಪುಟಾಣಿಗಳು, ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ನಡೆದವು.